Slide
Slide
Slide
previous arrow
next arrow

ಸಂತೊಳ್ಳಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

300x250 AD

ಶಿರಸಿ: ತಾಲೂಕಿನ ಸಂತೊಳ್ಳಿ ಗ್ರಾಮದ ಈಶ್ವರ, ಬಸವೇಶ್ವರ ಸಭಾಭವನದಲ್ಲಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಶಿರಸಿ, ಸ್ಪರ್ಶ ಫೌಂಡೇಷನ್ ಹಾಗೂ ಗ್ರಾಮ ಪಂಚಾಯತ ಬದನಗೋಡ, ಗಣೇಶ ಕಣ್ಣಿನ ಆಸ್ಪತ್ರೆ ಅಕ್ಕಿ ಆಲೂರು ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ, ಮಾಹಿತಿ ಶಿಬಿರವು ಜರುಗಿತು. ಸುಮಾರು ನೂರಕ್ಕೂ ಅಧಿಕ ಜನರು ಹಾಜರಿದ್ದರು.

ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಸದಸ್ಯ ಭದ್ರ ಬಿ ಗೌಡ್ರು ವಹಿಸಿದ್ದರು. ಉದ್ಘಾಟನೆಯನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಅಕ್ಕಮ್ಮಾ ಆಲೂರ ನೆರವೇರಿಸಿದರು. ಪಿ.ಡಿ.ಓ ಪರಸಪ್ಪ ಲಮಾಣಿ, ದಶರಥರಾಜ ಬೂದಿಹಾಳಕರ ಗ್ರೇ.1 ಪಂ, ಸರ್ಕಾರಿ ಆಸ್ಪತ್ರೆಯ ಜಗದೀಶ ನಾಯ್ಕ, ಚೈತ್ರಾ ದಾರವಾಡ, ಕೆಂಪಣ್ಣ, ಪೂಜಾ. ಸ್ಪರ್ಶ ಪೌಂಡೇಶನ್‌ನ ಗಣಪತಿ ಮಾಳಿ, ರೇಣುಕಾ ಅಕ್ಕೂರ, ಕಾವೇರಿ, ಕಾವ್ಯ ಗಣೇಶ ಐಕೇರ, ಆದಿತ್ಯ ಆರ್, ಸುಹಾನಾ ಕಚವಿ, ಅಂಗನವಾಡಿ ಕಾರ್ಯಕರ್ತೆ ಸವಿತಾ ಬಿ ಬಿಜಾಪುರ, ಆಶಾ ಕಾರ್ಯಕರ್ತೆ ಗೀತಾ ತಂಬೂಳಿ, ಎಸ್.ಡಿ.ಎಮ್.ಸಿ. ಅಧ್ಯಕ್ಷ ರವಿ ಭೋವಿ, ಗ್ರಾಮದ ಹಿರಿಯರು ಬಂಗಾರೆಪ್ಪ ಲೆಕ್ಕದ, ಚನ್ನಪ್ಪ ಗೌಡ, ಪರಸಪ್ಪ, ದಯಾನಂದ, ಶಿವಪ್ಪ, ಬಸಪ್ಪ, ಇನ್ನು ಅನೇಕ ಗ್ರಾಮಸ್ಥರು ಹಾಜರಿದ್ದರು. ಸ್ವಾಗತ ಪ್ರಸ್ತಾವಿಕ ವಂದನಾರ್ಪಣೆ ಯುವರಾಜ ಜೆ ಗೌಡ ನೆರವೇರಿಸಿದರು.

300x250 AD
Share This
300x250 AD
300x250 AD
300x250 AD
Back to top